ಎಲ್ಲರಿಗೂ ನಮಸ್ಕಾರ…
ನೀವು ತೆಗೆದುಕೊಂಡ ಸಾಲಕ್ಕೆ ಅತಿ ಕಡಿಮೆ ಬಡ್ಡಿಯ ದರವು ಇರುತ್ತದೆ. ಬಡ್ಡಿ ರಹಿತ ಸಾಲವನ್ನು ರೈತರಿಗೆ ಮಾತ್ರ ನೀಡಲಾಗುತ್ತದೆ. ರೈತರಿಗೆ ಏಕೆ ? ಸಾಲವನ್ನು ನೀಡುತ್ತಾರೆ. ಸರ್ಕಾರ ನಮಗೆ ಏಕೆ ಸಾಲವನ್ನು ನೀಡುವುದಿಲ್ಲ, ಎಂದು ನಿಮ್ಮ ಪ್ರಶ್ನೆಯೇ, ಹಾಗಾದರೆ ಇನ್ನು ಮುಂದಿನ ಮಾಹಿತಿಯನ್ನು ಓದಿ ತಿಳಿಯಿರಿ. ರೈತರಿಗೆ ಮಾತ್ರ ಈ ಅಗ್ರಿಕಲ್ಚರ್ ಸಾಲ ಸೌಲಭ್ಯ ದೊರೆಯುತ್ತದೆ. ಏಕೆಂದರೆ ರೈತರು ದಿನನಿತ್ಯ ಜೀವನದಲ್ಲಿ ತಮ್ಮ ಹೊಲಗಳಲ್ಲಿ ಬೆಳೆಯನ್ನು ಬಿತ್ತನೆ ಮಾಡಲು ಹಾಗೂ ಗೊಬ್ಬರಕ್ಕೆ ಹಣವನ್ನು ಮೀಸಲಿಡಬೇಕಾಗುತ್ತದೆ ಎಲ್ಲಾ ಕೆಲಸಕ್ಕೂ ಕೂಡ ಹಣದ ಅವಶ್ಯಕತೆ ತುಂಬಾ ಮುಖ್ಯವಾಗಿದೆ. ಈ ಸಮಸ್ಯೆಯನ್ನು ಗಮನಿಸಿದ ಸರ್ಕಾರವು ರೈತರಿಗಾಗಿಯೇ ಅಗ್ರಿಕಲ್ಚರ್ ಸಾಲವನ್ನು ಕೊಡಲು ಮುಂದಾಗಿದೆ.
ನೀವು ಯಾವ ಕಾರಣಕ್ಕೆ ಸಾಲವನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಂಡು, ಸರ್ಕಾರದ ಅಗ್ರಿಕಲ್ಚರ್ ಸಾಲಕ್ಕೆ ತಿಳಿಸಬೇಕು. ನಂತರ ನೀವು ಆಯ್ಕೆ ಮಾಡಿಕೊಂಡ ಸಾಲದ ಕಾರಣಕ್ಕೆ ಬಡ್ಡಿ ದರವನ್ನು ಕಡಿಮೆ ಮಾಡಿ ವಿಧಿಸಲಾಗುತ್ತದೆ. ಹಾಗೂ ಇನ್ನೂ ಕೆಲ ಕಾರಣಗಳಿಗೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.
ಬಡ್ಡಿ ರಹಿತ ಸಾಲಭ್ಯ !
ಹೌದು ರೈತರಿಗಾಗಿ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ ಸರ್ಕಾರ. ಈ ಒಂದು ಯೋಜನೆ ಅಡಿಯಲ್ಲಿ ಬ್ಯಾಂಕ್ ಗಳ ಮೂಲಕ, ಅಂದರೆ ಡಿಸಿಸಿ ಬ್ಯಾಂಕ್ ನ ಮೂಲಕ ಅರ್ಹ ರೈತರಿಗೆ ಸಾಲವನ್ನು ನೀಡಿ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಕುರಿ ಸಾಕಾಣಿಕೆ, ಹೈನುಗಾರಿಕೆ, ಬಡ್ಡಿ ರಹಿತ ಕೃಷಿ ಸಾಲ ಇನ್ನು ಮುಂತಾದ ವಿವಿಧ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ಸಾಲ ಪಡೆಯುವ ರೈತರು ಡಿಸಿಸಿ ಬ್ಯಾಂಕ್ ನೊಂದಿಗೆ ಲೋನ್ ಅನ್ನು ಪಡೆದುಕೊಳ್ಳಬೇಕು. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಅಗ್ರಿಕಲ್ಚರ್ ಸಾಲ ಸೌಲಭ್ಯ ದೊರಕುತ್ತದೆ.
ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.
ಕೃಷಿ ಸಾಲವನ್ನು ಈ ರೀತಿ ಪಡೆದುಕೊಳ್ಳಿ.
ನೀವು ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಪಡೆಯಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ನೀವು ಫ್ರೂಟ್ಸ್ ಐಡಿಯನ್ನು ಹೊಂದಿರಬೇಕು. ಹಾಗೂ ಆ ಐಡಿಯೂ ಸರ್ವೇ ನಂಬರ್ ಮೂಲಕ ಲಿಂಕ್ ಆಗಿರಬೇಕು. ಅಂಥಹ ಅರ್ಹ ರೈತರಿಗೆ ಮಾತ್ರ ಬಡ್ಡಿ ರಹಿತ ಸಾಲ ದೊರೆಯುತ್ತದೆ. 1-3 % ಬಡ್ಡಿಯನ್ನು ತೆಗೆದುಕೊಂಡ ಸಾಲಕ್ಕೆ ವಿಧಿಸಲಾಗುತ್ತದೆ. ಆದರೆ ಕೆಲವೊಂದು ಕೆಲಸದ ಕೃಷಿ ಚಟುವಟಿಕೆಗಳ ಸಾಲ ಸೌಲಭ್ಯಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಇದು ಎಲ್ಲಾ ರೈತರಿಗೂ ಕೂಡ ಕಡ್ಡಾಯವಾಗಿದೆ ಫ್ರೂಟ್ಸ್ ಐಡಿ, ಹಾಗೂ ಸರ್ವೇ ನಂಬರ್ ಲಿಂಕ್ ಆಗಿರಬೇಕು.
ಅರ್ಹ ರೈತರು ಡಿಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು. ಸರ್ವೇ ನಂಬರ್ ಹಾಗೂ ಪಹಣಿಯನ್ನು ಸಾಲ ತೆಗೆದುಕೊಳ್ಳುವುದಕ್ಕೆ ದಾಖಲಾತಿಯಾಗಿ ನೀಡತಕ್ಕದ್ದು. ಈ ಎರಡು ದಾಖಲಾತಿಗಳನ್ನು ಗಮನದಲ್ಲಿಟ್ಟುಕೊಂಡು ಸಾಲವನ್ನು ತೆಗೆದುಕೊಳ್ಳಲು ಮುಂದಾಗಿರಿ. ನಿಮ್ಮ ಹತ್ತಿರ ಈ ದಾಖಲಾತಿಗಳಿದ್ದರೆ ಮಾತ್ರ ಸಾಲ ಸುಲಭವಾಗಿ ಸಿಗುತ್ತದೆ.
ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಡಿಸಿಸಿ ಬ್ಯಾಂಕ್ ನೀಡುತ್ತದೆ. ಆ ಸಾಲವನ್ನು ರೈತರು ಒಂದು ವರ್ಷದೊಳಗೆ ಮರುಪಾವತಿಸಿ ಮತ್ತೆ ಮುಂದಿನ ಲೋನ್ ಅನ್ನು ಪಡೆದುಕೊಳ್ಳಬಹುದು. ಅಂದರೆ ಇಯರ್ಲಿ ರಿನಿವಲ್ ಮಾಡಿಸಿಕೊಳ್ಳಬಹುದು. ಈ ರೀತಿ ಮಾಡಿಸಿಕೊಳ್ಳುವುದರಿಂದ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಬ್ಯಾಂಕ್.
ನಿಮಗೆ ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆ ಹಾಗಾದರೆ ನಿಮ್ಮ ಅಕ್ಕಪಕ್ಕದ ಡಿಸಿಸಿ ಬ್ಯಾಂಕ್ ಶಾಖೆಗೆ ಒಮ್ಮೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ, ನೀವು ಕೂಡ ಸಾಲವನ್ನು ಪಡೆಯಿರಿ. ನಿಮ್ಮ ಸ್ನೇಹಿತರು ರೈತರೆ ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಸಾಲದ ಮಾಹಿತಿಯನ್ನು ತಿಳಿಸಿರಿ.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.