ಎಲ್ಲರಿಗೂ ನಮಸ್ಕಾರ… ಸಿಎಂ ಸಿದ್ದರಾಮಯ್ಯನವರು ವಸತಿ ಯೋಜನೆ ಅಡಿಯಲ್ಲಿ ಎಲ್ಲಾ ವಸತಿ ರಹಿತ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ವಸತಿ ಯೋಜನೆಯ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಯಾರು ಬೆಂಗಳೂರಿನಲ್ಲಿ ವಾಸಿಸುತ್ತಿರುತ್ತಾರೋ ಅಂತಹ ಕುಟುಂಬಗಳಿಗೆ ವಸತಿಯನ್ನು ನಿರ್ಮಿಸಲು ಸರ್ಕಾರ ಸಹಾಯ ಮಾಡುತ್ತದೆ.
ಹಾಗೂ ರಾಜ್ಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯನ್ನು ನಿರ್ವಹಿಸಿರುವುದು ರಾಜ್ಯ ಸರ್ಕಾರದ ಕರ್ತವ್ಯ, ಆ ಕರ್ತವ್ಯದಂತೆಯೇ ವಸತಿ ಯೋಜನೆ ಅಡಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ವಸತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಯಾರು ಈ ಒಂದು ಯೋಜನೆಗೆ ಅರ್ಹರು ಮತ್ತು ಯಾವ ದಾಖಲಾತಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.
ಇತ್ತೀಚಿನ ದಿನಗಳಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಎಲ್ಲಾ ಕುಟುಂಬಗಳಿಗೂ ಸರ್ಕಾರ ದೀಪಾವಳಿಯ ಉಡುಗೊರೆ ಎಂದು ನೀಡಿದ್ದು ಅದೇ ರೀತಿ ಈ ಒಂದು ಯೋಜನೆ ಅಡಿಯಲು ಕೂಡ ವಸತಿರಹಿತ ಕುಟುಂಬಗಳಿಗೆ ಉಚಿತವಾಗಿ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ನೀಡಲಿದೆ. ಒಬ್ಬ ವ್ಯಕ್ತಿಯ ಕನಸೇನೆಂದರೆ, ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಿಸಬೇಕೆಂಬುದು ಎಲ್ಲಾ ಮನುಷ್ಯರ ಕನಸು ಆ ಕನಸಿನಂತೆ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ.
ಏಕೆಂದರೆ ಆರ್ಥಿಕವಾಗಿ ಹಣದ ಸಮಸ್ಯೆಯೂ ಕೂಡ ಎದುರಾಗಬಹುದು ಆ ಸಮಸ್ಯೆಗಳನ್ನು ತೊರೆದು ಹಾಕಲು ಸರ್ಕಾರವು ನಿಮಗೆ ಕೆಲವೊಂದು ಯೋಜನೆಗಳಲ್ಲಿ ಸಹಾಯ ಮಾಡುತ್ತದೆ ಆ ಯೋಜನೆಗಳ ಸಹಾಯವನ್ನೆಲ್ಲ ಬಳಸಿಕೊಂಡು ನೀವು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಈಗಾಗಲೇ ರಾಜ್ಯದಲ್ಲಿ ಹಲವಾರು ಯೋಜನೆಗಳು ಜಾರಿಯಾಗಿ ಎಲ್ಲಾ ಫಲಾನುಭವಿಗಳು ಕೂಡ ಆ ಯೋಜನೆಯ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೀವು ಕೂಡ ಸರ್ಕಾರದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದರೆ ಈ ರೀತಿಯಾಗಿ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಕೂಡ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಿರಿ.
ಇವರು ಮಾತ್ರ ಈ ಯೋಜನೆಗೆ ಅರ್ಹರು !
ಎಲ್ಲ ಯೋಜನೆಗಳಿಗೂ ಕೂಡ ಅರ್ಹತಾ ಮಾನದಂಡಗಳು ಇರುತ್ತವೆ. ಅದೇ ರೀತಿ ಈ ಯೋಜನೆಗೂ ಕೂಡ ಇದೆ, ಅದೇನಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಹಾಗೂ ಬಡತನ ರೇಖೆಗಿಂತ ಕೆಳ ರೇಖೆಯಲ್ಲಿ ಇರಬೇಕು. ವಾರ್ಷಿಕ ಆದಾಯವು 87 ಸಾವಿರಕ್ಕಿಂತ ಹೆಚ್ಚಿನ ಹಣ ಇರಬಾರದು ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರಬೇಕು. ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ. ಹಾಗೂ ಅರ್ಜಿದಾರರು ಬೆಂಗಳೂರಿನಲ್ಲೇ ಕನಿಷ್ಠ ಐದು ವರ್ಷಗಳಿಂದ ವಾಸವಾಗಿರಬೇಕು.
ಅಂತಹ ಫಲಾನುಭವಿಗಳು ಮಾತ್ರ ಈ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯವನ್ನು ಪಡೆಯಲು ಸಾಧ್ಯ. ಅರ್ಜಿ ಸಲ್ಲಿಸುವ ಅರ್ಜಿದಾರರ ಹೆಸರಲ್ಲಿ ಸ್ವಂತ ಮನೆ ಯಾವುದೇ ಕಾರಣಕ್ಕೂ ಎಲ್ಲಿಯೂ ಇರಬಾರದು ಅದರಲ್ಲೂ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೆ ಮಾತ್ರ ಈ ಯೋಜನೆ ಅವರಿಗೆ ಸಲ್ಲುವುದಿಲ್ಲ ಹಾಗಾಗಿ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡ ನಂತರ ಫೋನಿನ ಮೂಲಕವೇ ಈ ಕೆಳಕಂಡ ರೀತಿ ಅರ್ಜಿಯನ್ನು ಪೂರೈಸಿರಿ.
ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲಾತಿಗಳು ಕಡ್ಡಾಯ !
ಹೌದು ಈ ಯೋಜನೆ ಅಡಿಯಲ್ಲಿ ವಸತಿಯನ್ನು ಪಡೆಯಬೇಕೆಂದರೆ ನೀವು ಕೆಲವೊಂದು ದಾಖಲಾತಿಗಳನ್ನು ಹೊಂದಿರಬೇಕು ಆ ದಾಖಲಾತಿಗಳಲ್ಲಿ ಮೊದಲನೆಯದು ಏನೆಂದರೆ ಬಿಪಿಎಲ್ ಕಾರ್ಡ್, ಅಭ್ಯರ್ಥಿಯ ವಾಸ ಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅರ್ಜಿದಾರನ ಪಾನ್ ಕಾರ್ಡ್, ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಬ್ಯಾಂಕ್ ಖಾತೆ ವಿವರಗಳು. ಈ ದಾಖಲಾತಿಗಳನ್ನೆಲ್ಲ ಹೊಂದಿದ್ದರೆ ಮಾತ್ರ ನಿಮಗೆ ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಮನೆಯನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ !
ವಸತಿ ಯೋಜನೆ ಅಡಿಯಲ್ಲಿ ನೀವು ಕೂಡ ಅರ್ಜಿಯನ್ನು ಪೂರೈಸಿ ಉಚಿತವಾಗಿ ಮನೆಯನ್ನು ಪಡೆಯುತ್ತೀರಿ ಎಂದರೆ ನೀವು ಈ ಕೂಡಲೇ ಮೊಬೈಲ್ ಮೂಲಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಪೂರೈಸಬೇಕಾಗುತ್ತದೆ. ಅರ್ಜಿ ಪೂರೈಸಲು ನೀವು ಈ ಲಿಂಕನ್ನು ಕ್ಲಿಕ್ಕಿಸಿರಿ. http://ashraya.karnataka.gov.in/ಕ್ಲಿಕ್ಕಿಸಿದ ಬಳಿಕ ವಸತಿ ಯೋಜನೆಯ ಪುಟ ತೆರೆಯುತ್ತದೆ. ಅನಂತರ ನೀವು ಅಲ್ಲಿ ವಸತಿ ಯೋಜನೆಯ ಫಾರಂ ಅನ್ನು ತೆರೆಯಬೇಕು ಅನಂತರ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಪೂರೈಸಬೇಕು.
ನಂತರ ಯೋಜನೆಯ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಿರಿ ತಿಳಿದುಕೊಂಡ ಬಳಿಕ ಅರ್ಜಿಯನ್ನು ಸಲ್ಲಿಸಿರಿ. ಅರ್ಜಿ ಸಲ್ಲಿಸಿದ ನಂತರ ನೀವು ಈ ಯೋಜನೆಗೆ ಅರ್ಹರು ಎಂದಾದರೆ ನಿಮಗೆ ಉಚಿತವಾಗಿ ಮನೆ ನಿರ್ಮಾಣ ಮಾಡಲು ಸರ್ಕಾರ ಸಹಾಯ ಮಾಡುತ್ತದೆ. ಈ ರೀತಿಯಾಗಿ ವಸತಿ ಯೋಜನೆ ಅಡಿಯಲ್ಲಿ ಉಚಿತವಾದ ಮನೆಯನ್ನು ಪಡೆದುಕೊಳ್ಳಬಹುದು.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.