ಎಲ್ಲರಿಗೂ ನಮಸ್ಕಾರ…
ಬಡತನದಲ್ಲೇ ಜೀವನ ನಡೆಸುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಸೇರಲು ಹಾಗೂ ಕಾಲೇಜಿನ ಶುಲ್ಕವನ್ನು ಕಟ್ಟಲು ಕೂಡ ಹಣದ ಸಮಸ್ಯೆ ಎದುರಾಗಬಹುದು ಇಂತಹ ಸಮಸ್ಯೆಯನ್ನು ತೊರೆದು ಹಾಕಲು ಹಲವಾರು ಸಂಸ್ಥೆ ಹಾಗೂ ಮಂಡಳಿಗಳು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿವೆ. ಇಂಥಹ ಎಲ್ಲಾ ವೇತನವನ್ನು ಬಳಸಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಿರಿ ವಿದ್ಯಾರ್ಥಿಗಳೇ. ಎಲ್ಲಾ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿಯು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇನ್ನು ಏಕೆ ತಡ ಮಾಡುತ್ತಿದ್ದೀರಾ ? ಈ ಕೂಡಲೇ ಅರ್ಜಿ ಸಲ್ಲಿಸಿ. ಇನ್ನು ಮುಂತಾದ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ಓದಿ.
ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ !
ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಹಾಗೂ ಕರ್ನಾಟಕದಲ್ಲಿ ಏಳು ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾದ ಕಾರ್ಮಿಕ ಕಲ್ಯಾಣ ಮಂಡಳಿ. ವಿಧಾನಸೌಧದಲ್ಲಿ ನವೆಂಬರ್ 7 ರಂದು ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಪಾಲ್ಗೊಂಡು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಅನುಮೋದನೆಯನ್ನು ಪಾಲಿಸಲಿದೆ ಕಾರ್ಮಿಕ ಕಲ್ಯಾಣ ಮಂಡಳಿ. ಕಾರ್ಮಿಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಿದ ನಂತರ ಮಂಡಳಿಯ ಆದೇಶದ ನಂತರ ವಿದ್ಯಾರ್ಥಿವೇತನದ ಹಣ ವರ್ಗಾವಣೆ ಆಗುತ್ತದೆ.
6500 ಕೋಟಿಗಿಂತ ಹೆಚ್ಚು ಸೆಸ್ ಸಂಗ್ರಹ ಮಾಡುತ್ತಿರುವ ಕಾರ್ಮಿಕ ಕಲ್ಯಾಣ ಮಂಡಳಿಯು 1.82 ಕೋಟಿ ಕಾರ್ಮಿಕರನ್ನು ನೋಂದಾಯಿಸಿಕೊಂಡಿದೆ. ಹಲವಾರು ವರ್ಷಗಳಿಂದ ವಾರ್ಷಿಕವಾಗಿ 800 ಸಂಗ್ರಹವಾಗುತ್ತಿತ್ತು ಹಾಗೂ ಖಾಸಗಿ ವಲಯದಲ್ಲಿ 200 ಸಂಗ್ರಹವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನವಾಗಿ ಹಣವನ್ನು ಖಾತೆಗೆ ವರ್ಗಾಯಿಸಲಾಗುವುದು. ಮತ್ತು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಅಲ್ಲದೆ ಇನ್ನು ಮುಂತಾದ ಸೌಲಭ್ಯಗಳು ದೊರೆಯುತ್ತದೆ ಯಾವ ಸೌಲಭ್ಯ ಎಂದು ಕೇಳುತ್ತೀರಾ ಅದುವೇ ಕಾರ್ಮಿಕರು ಮನೆ ಕಟ್ಟಲು ಹಣದ ಸಹಾಯ, ಹಾಗೂ ಹೆಣ್ಣು ಮಗಳ ಮದುವೆಯನ್ನು ಮಾಡಲು ಖರ್ಚಿನ ವೇಳೆ ಬೇಕಾದ ಮೊತ್ತದ ಸಾಹಾಯ. ಇನ್ನು ಹಲವಾರು ಕಾರಣಗಳನ್ನು ನೀಡಿ ಮೂರು ಸಾವಿರ ಕೋಟಿ ಹಣವನ್ನು ಅನುದಾನವಾಗಿ ಪಡೆದುಕೊಳ್ಳಬಹುದು.
ಇದನ್ನು ಓದಿ :- ಸ್ವಾಮಿ ದಯಾನಂದ ಫೌಂಡೇಶನ್ ವತಿಯಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ ! ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂ ಹಣ.
ಹೊಸ ಅಪ್ಲಿಕೇಶನ್ ಕಾರ್ಮಿಕ ಕಲ್ಯಾಣ ಮಂಡಳಿಯಿಂದ.
ಹೌದು, ಇನ್ಮುಂದೆ ಹೊಸ ಅಪ್ಲಿಕೇಶನ್ ಇಂದ ಕಾರ್ಮಿಕ ಕಲ್ಯಾಣ ಮಂಡಳಿ, ಮಿಂಚಲಿದೆ. ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ಯಾವ ಯಾವ ಸೌಲಭ್ಯ ದೊರೆಯುತ್ತದೆ ಕಾರ್ಮಿಕ ಮಕ್ಕಳಿಗೆ ಹಾಗೂ ಇನ್ನು ಮುಂತಾದ ಯೋಜನೆಗಳ ಬಗ್ಗೆ ತಿಳಿಸಲು ಮುಂದಾಗಿದೆ ಸರ್ಕಾರ ಕಾಲ ಬದಲಾಗುತ್ತಿದ್ದಂತೆ ಟೆಕ್ನಾಲಜಿ ಕೂಡ ಬದಲಾಗುತ್ತೆ ಆ ಟೆಕ್ನಾಲಜಿಗಳಿಗೆ ನಾವು ಹೊಂದಿಕೊಂಡು ಹೋಗಬೇಕೆಂಬ ನಿಟ್ಟಿನಲ್ಲಿ ಈ ಒಂದು ನಿರ್ಧಾರವನ್ನು ಘೋಷಿಸಿದೆ ಸರ್ಕಾರ. ಈ ಅಪ್ಲಿಕೇಶನ್ ನಲ್ಲಿ ವಿದ್ಯಾರ್ಥಿವೇತನ ಯಾವಾಗ ನೀಡುತ್ತಾರೆ ಹಾಗೂ ಎಷ್ಟು ಹಣವನ್ನು ನೀಡುತ್ತಾರೆ ಎಂಬ ಎಲ್ಲಾ ಹಲವಾರು ಮಾಹಿತಿಯನ್ನು ಒಂದೇ ಸ್ಥಳದಲ್ಲಿ ನೋಡಬಹುದು.
ಕಾರ್ಮಿಕ ಮಕ್ಕಳು ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬೇಕೆಂದರೆ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು ಎಂದು ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ. ನೀವು ಕೂಡ ಕಾರ್ಮಿಕರ ಮಕ್ಕಳ ಹಾಗಾದ್ರೆ ನಿಮಗೂ ಸಿಗಲಿದೆ ವಿದ್ಯಾರ್ಥಿವೇತನ ಈ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಿ ಯಾರು ಕೂಡ ಈ ವಿದ್ಯಾರ್ಥಿ ವೇತನವನ್ನು ಕಳೆದುಕೊಳ್ಳಬೇಡಿ ಎಲ್ಲ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಿರಿ.
ಕಡು ಬಡತನದಲ್ಲೇ ಬೆಳೆಯುತ್ತಿರುವ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣದ ಸಮಸ್ಯೆ ಉಂಟಾದರೆ, ಈ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಂಡು ಓದಿ. ಮುಂದೊಂದು ದಿನ ಒಳ್ಳೆಯ ಉದ್ಯೋಗದಲ್ಲಿ ಇರಬಹುದು. 2023 ನೇ ಸಾಲಿನಲ್ಲಿ ಸಂಸ್ಥೆಗಳು ಹಾಗೂ ಮಂಡಳಿಗಳು ಹಲವಾರು ವಿದ್ಯಾರ್ಥಿ ವೇತನಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಎಲ್ಲಾ ವಿದ್ಯಾರ್ಥಿ ವೇತನವನ್ನು ಪಡೆಯಿರಿ. ನಿಮ್ಮ ಸ್ನೇಹಿತರೊಟ್ಟಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ. ಅವರು ಕೂಡ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲಿ,
ಇದನ್ನು ಓದಿ :- ಸ್ವಾಮಿ ದಯಾನಂದ ಫೌಂಡೇಶನ್ ವತಿಯಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ ! ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂ ಹಣ.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.