ಎಲ್ಲರಿಗೂ ನಮಸ್ಕಾರ…
ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸರಕು ಹಾಗು ಟ್ಯಾಕ್ಸಿ ( ಹಳದಿ ಬೋರ್ಡ್ ) ಒಂದಿರುವ ಚಾಲಕರಿಗೆ ಈ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು, ಏಕೆಂದರೆ ಇವರಿಗೆ ಮಾತ್ರ ಈ ಸಾಲದ ಸೌಲಭ್ಯ ಸರ್ಕಾರದಿಂದ ಸಿಗಲಿದೆ. ಟ್ಯಾಕ್ಸಿ ಅಥವಾ ಯಾವುದೇ ವಾಹನಗಳನ್ನು ಖರೀದಿಸಬೇಕು ಎಂಬ ಆಸೆ ಇದ್ದರೆ ಅಂತಹ ಚಾಲಕರಿಗೆ ಸರ್ಕಾರವೇ ಸಹಾಯಧನವೆಂದು ಸಾಲದ ರೀತಿ ಹಣವನ್ನು ಖಾತೆಗೆ ವರ್ಗಾಯಿಸುತ್ತದೆ.
ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದಲೇ ಸಿಗಲಿದೆ ಸಾಲದ ಸೌಲಭ್ಯ, ಈ ಸಾಲದ ಸೌಲಭ್ಯವನ್ನು ಯಾವ ರೀತಿ ಉಪಯೋಗಿಸಬೇಕು ಹಾಗೂ ಯಾರು ಈ ಒಂದು ಯೋಜನೆಗೆ ಅರ್ಹರು ಎಂಬ ಮಾಹಿತಿಯನ್ನು ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.
ನೀವೇನಾದರೂ ಟ್ಯಾಕ್ಸಿ ಖರೀದಿಸಬೇಕು ಎಂದುಕೊಂಡಿದ್ದೀರ ? ಹಾಗಾದ್ರೆ ಕೂಡಲೇ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ, ನವೆಂಬರ್ 29ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ವಾಹನ ವಾಹನಗಳನ್ನು ಚಲಿಸುವ ಚಾಲಕರೆ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ, ಕೂಡಲೇ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಸಾಲದ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಿ. ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಹಾಗೂ ಈ ಯೋಜನೆಗೆ ಯಾರು ಅರ್ಹರು ಎಂಬುದನ್ನು ತಿಳಿದುಕೊಳ್ಳಿ.
ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಒಂದು ಸಾಲದ ಸೌಲಭ್ಯ ದೊರೆಯುತ್ತಿದೆ, ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !
ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವತಿ ಯುವಕರಿಗೆ ಈ ಒಂದು ಅಭಿವೃದ್ಧಿ ನಿಗಮದಿಂದ ಸಾಲದ ಸೌಲಭ್ಯ ದೊರಕಲಿದೆ. ಮತ್ತು ಉದ್ಯೋಗಾವಕಾಶವನ್ನು ದೊರಕಿಸಿಕೊಡಲಿದೆ ಈ ಯೋಜನೆ. ಸಹಾಯಧನವನ್ನು 70ರಷ್ಟು ನೀಡಲಾಗುತ್ತದೆ ಅಂದರೆ ಒಂದು ಲಕ್ಷದವರೆಗೂ ಸಾಲದ ಸೌಲಭ್ಯವನ್ನು ನೀಡುತ್ತದೆ ಹಾಗೂ ಪರಿಶಿಷ್ಟ ವರ್ಗದ ಜನಗಳಿಗೆ ಶೇಕಡಾ 70ರಷ್ಟು ಸಾಲ ಲಭ್ಯ ಅಂದರೆ ಎರಡು ಲಕ್ಷದವರೆಗೆ ಹಣ ನೀಡಲಿದೆ ಈ ಯೋಜನೆ. ನೀವೇನಾದರೂ ಸರಕು ಹಾಗು ಟ್ಯಾಕ್ಸಿಗಳಂತಹ ವಾಹನಗಳನ್ನು ಖರೀದಿಸಬೇಕೆಂದು ಅಂದುಕೊಂಡಿದ್ದರೆ ಅಂತ ಚಾಲಕರಿಗೆ ಮಾತ್ರ ಶೇಕಡ 75ರಷ್ಟು ಹಣ ನೀಡಲಿದೆ ಅಂದರೆ 4 ಲಕ್ಷದವರೆಗೆ ಸಾಲದ ಸೌಲಭ್ಯ ದೊರೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಹೊಂದಿರಬೇಕು.
- ಅಭ್ಯರ್ಥಿಯ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಜಾತಿ ಪ್ರಮಾಣ ಪತ್ರ
- ಅಭ್ಯರ್ಥಿಯ ಆದಾಯ ಪ್ರಮಾಣ ಪತ್ರ.
- ವಾಹನವನ್ನು ಚಲಿಸುವ ಪರವಾನಗಿ ( driving licence )
- ಬ್ಯಾಂಕ್ ಖಾತೆ
- ಖರೀದಿಸಿರುವ ವಾಹನದ ಬೆಲೆ ಪಟ್ಟಿ
- ಅಭ್ಯರ್ಥಿಯ ಸ್ವಯಂ ಘೋಷಣೆ ಪತ್ರ
ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಕೂಡ ಅರ್ಜಿದಾರರು ಹೊಂದಿರಬೇಕು, ಆನ್ಲೈನ್ ಮೂಲಕವೇ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಲವನ್ನು ಪಡೆಯತಕ್ಕದ್ದು.
ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !
ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.
- ಕರ್ನಾಟಕದಲ್ಲೆ ಚಿರಂತನರಾಗಿರಬೇಕು
- ವಯಸ್ಸಿನ ಅಂತರ 21 ರಿಂದ 45 ವಯಸ್ಸುಳ್ಳವರಾಗಿರಬೇಕು.
- ಅರ್ಜಿದಾರರ ಕುಟುಂಬದ ಆದಾಯ 4,50,000 ಮೀರಿರಬಾರದು.
- ಡ್ರೈವಿಂಗ್ ಲೈಸೆನ್ಸ್ ಕೂಡ ಅರ್ಜಿದಾರ ಹೊಂದಿರಬೇಕು.
- ಅಭ್ಯರ್ಥಿಯ ಕುಟುಂಬದ ಸದಸ್ಯರು ಯಾವುದೇ ರೀತಿಯ ಸರ್ಕಾರಿ ನೌಕರಿಯಲ್ಲಿ ಇರಬಾರದು.
- ಕಳೆದ 5 ವರ್ಷಗಳಿಂದ ಅಭ್ಯರ್ಥಿಯ ಕುಟುಂಬದ ಸದಸ್ಯರು ಯಾವುದೇ ರೀತಿಯ ಬೇರೊಂದು ಯೋಜನೆಯಲ್ಲಿ ಸಾಲವನ್ನು ಪಡೆದುಕೊಂಡಿರಬಾರದು.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.