ಎಲ್ಲರಿಗೂ ನಮಸ್ಕಾರ…
ವಿಧಾನಸಭಾ ಚುನಾವಣೆ ಮುನ್ನವೇ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಜನರಿಗೆ ಮಾತನ್ನು ಕೊಟ್ಟಿದ್ದು, ಅದೇ ರೀತಿ 4 ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಒಂದು ಯೋಜನೆ ಮಾತ್ರ ಜನವರಿಯಿಂದ ಜಾರಿಯಾಗುತ್ತದೆ, ಎಂಬ ಮಾಹಿತಿಯು ಕೂಡ ತಿಳಿದು ಬಂದಿದೆ ಎಲ್ಲರಿಗೂ ಕೂಡ ಇದು ಗೊತ್ತಿರುವ ವಿಷಯಾನೇ, ಆದರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೊಸ ನಿಯಮವನ್ನು ಜಾರಿ ತರುತ್ತಿದೆ ಸರ್ಕಾರ. ಅದೇನೆಂದರೆ ಅಕ್ಕಿ ಬದಲು ಹಣವನ್ನು ಈ ಹಿಂದೆ ನೀಡುತ್ತಿದ್ದರು ಪ್ರತಿ ವ್ಯಕ್ತಿಗೂ ಕೂಡ 10 ಕೆಜಿ ಅಕ್ಕಿಯನ್ನು ವಿತರಿಸಬೇಕೆಂದು ನಿರ್ಧಾರ ಮಾಡಿದ್ದರು,
ಆದರೂ ಕೂಡ 5 ಕೆಜಿ ಅಕ್ಕಿಯನ್ನು ಮಾತ್ರ ಎಲ್ಲಾ ಫಲಾನುಭವಿಗಳಿಗೆ ವಿತರಿಸುತ್ತಿದ್ದರು ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ಪಾವತಿಸುತ್ತಿದ್ದರು ಪ್ರತಿ 1 ಕೆಜಿ ಅಕ್ಕಿಗೂ ಕೂಡ ರೂ.37 ಹಣವನ್ನು ನೀಡಲಾಗುತ್ತಿತ್ತು. ಒಬ್ಬ ವ್ಯಕ್ತಿಗೆ 170 ರೂ ಹಣ ಖಾತೆಗೆ ಜಮಾ ಆಗುತ್ತಿತ್ತು. ಕಳೆದ ಮೂರು ನಾಲ್ಕು ತಿಂಗಳಿಂದಲೇ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಆದರೆ ಇನ್ಮುಂದೆ ಹಣ ಜಮಾ ಆಗುವುದಿಲ್ಲ. ಹೊಸ ಆದೇಶವನ್ನು ಹೊರಡಿಸಿ ಹಣ ಬದಲು ಬೇರೆ ಧಾನ್ಯವನ್ನು ನೀಡುತ್ತದೆ ಕೇಂದ್ರ ಸರ್ಕಾರ, ಯಾವ ಧಾನ್ಯ ಎಂದು ತಿಳಿಯಲು ಲೇಖನವನ್ನು ಓದಿರಿ.
ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ರವರು ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು, ಹಾಗೂ ಅಕ್ಕಿ ಯ ಜೊತೆಗೆ ಐದು ಕೆಜಿ ಅಕ್ಕಿ ಹಣವನ್ನು ಕೂಡ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು, ಆದರೆ ಇನ್ಮುಂದೆ ಆ ಹಣವನ್ನು ಜಮಾ ಮಾಡುವುದಿಲ್ಲ. ಏಕೆಂದರೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಈ ಒಂದು ಸರ್ಕಾರದ ನಿರ್ಧಾರ ಇಷ್ಟವಿಲ್ಲದ ಕಾರಣದಿಂದ ಈ ಒಂದು ಹಣವನ್ನು ಸ್ಥಗಿತಗೊಳಿಸಲಾಗುತ್ತದೆ.
ಆ ಹಣದ ಬದಲಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಈ ಹಿಂದೆ ಐದು ಕೆಜಿ ಅಕ್ಕಿಯನ್ನು ಮಾತ್ರ ಎಲ್ಲಾ ಫಲಾನುಭವಿಗಳಿಗೆ ನೀಡಲು ಸಾಧ್ಯ ಎಂದು ತಿಳಿಸಿದ್ದು ಆದರೆ ಇನ್ನ ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ಕೂಡ ಜಮಾ ಮಾಡಲಾಗುತ್ತಿತ್ತು, ಇನ್ಮುಂದೆ ಐದು ಕೆಜಿ ಹಣದ ಬದಲು ಕೆಂಪು ಅಕ್ಕಿಯನ್ನು ನೀಡಲು ಮುಂದಾಗಿದೆ ಸರ್ಕಾರ. ಈ ಒಂದು ನಿರ್ಧಾರದಿಂದ ಬಿಪಿಎಲ್ ಕಾರ್ಡ್ ಹೊಂದಿದವರು ಜಾಸ್ತಿ ಪ್ರಮಾಣದ ಅಕ್ಕಿಯನ್ನು ಸ್ವೀಕರಿಸಬಹುದು. ಈ ನಿರ್ಧಾರದಿಂದಾದರು ಅವರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತೃಪ್ತಿಯನ್ನು ಕಾಣಲಿ. ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ. ಕೆಲ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿಯ ಬದಲು ಹಣವನ್ನು ನೀಡುವುದು ಒಪ್ಪಿಗೆ ಇರಲಿಲ್ಲ ಆದರೂ ಕೂಡ ಸರ್ಕಾರವು ಮಾತು ಕೊಟ್ಟಿದೆ ಎಂಬ ಸಲುವಾಗಿ ಅಕ್ಕಿಯ ಬದಲು ಹಣವನ್ನು ನೀಡುತ್ತಿತ್ತು,
ಇನ್ಮುಂದೆಯಾದರೂ10 ಕೆಜಿ ಅಕ್ಕಿಯನ್ನು ಎಲ್ಲಾ ಬಿಪಿಎಲ್ ಕಾರ್ಡ್ದಾರರಿಗೆ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಎಲ್ಲಾ ಫಲಾನುಭವಿಗಳಿಗೆ ಹೊಸ ವರ್ಷದ ಪ್ರಯುಕ್ತ ಖುಷಿಯ ಸುದ್ದಿಯನ್ನು ನೀಡಿದೆ. ಮುಂದಿನ ತಿಂಗಳಿನಿಂದ 5 ಕೆಜಿ ಅಕ್ಕಿಗೆ ಹಣವನ್ನು ಯಾರ ಖಾತೆಗೂ ಕೂಡ ಜಮಾ ಮಾಡುವುದಿಲ್ಲ ಹಣದ ಬದಲಿಗೆ ಕುಚ್ಚಲಕ್ಕಿ, ಅಥವಾ ಕೆಂಪು ಅಕ್ಕಿಯನ್ನು ವಿತರಿಸಲಾಗುತ್ತದೆ ಎಂದು ಕೆಎಚ್ ಮುನಿಯಪ್ಪ ರವರು ಮಾಹಿತಿ ನೀಡಿದ್ದಾರೆ ಮುಂದಿನ ತಿಂಗಳವರೆಗೂ ಕೂಡ ಕಾದು ನೋಡಬೇಕಿದೆ ಮತ್ತು ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಕೂಡ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ಆದರೆ ಇನ್ಮುಂದೆ ಈ ರೀತಿಯ ಹಣ ಬರುವುದಿಲ್ಲ ಹಣದ ಬದಲಿಗೆ ಅಕ್ಕಿಯನ್ನು ನೀಡುತ್ತದೆ ಸರ್ಕಾರ.
ಬಿಪಿಎಲ್ ಕಾರ್ಡ್ದಾರರು ಹಣದ ಬದಲಿಗೆ ಅಕ್ಕಿಯನ್ನೇ ನೀಡಿ ಎಂದು ಘೋಷಣೆ ಮಾಡಿದ್ದರು ಅದರಂತೆಯೇ ಸರ್ಕಾರವು ಮುಂದಿನ ತಿಂಗಳಿನಿಂದ 5 ಕೆಜಿ ಅಕ್ಕಿಯನ್ನು ಕೆಂಪು ಅಕ್ಕಿಯಾಗಿ ವಿತರಿಸಲಾಗುತ್ತದೆ ಉಳಿದ 5 ಕೆಜಿ ಅಕ್ಕಿಯನ್ನು ಬಿಳಿ ಅಕ್ಕಿಯಾಗಿ ವಿತರಿಸಲಾಗುತ್ತದೆ, ಈ ರೀತಿಯಾಗಿ 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ದಾರರ ಫಲಾನುಭವಿಗಳಿಗೆ ನೀಡಲಾಗುತ್ತದೆ. ಕುಚ್ಚಲಕ್ಕಿ ಅಥವಾ ಕೆಂಪು ಅಕ್ಕಿಯನ್ನು ಮುಂದಿನ ತಿಂಗಳಿನಿಂದ ಎಲ್ಲಾ ಬಿಪಿಎಲ್ ಕಾರ್ಡ್ದಾರರಿಗೂ ನೀಡುತ್ತಾರ ಎಂದು ಕಾದು ನೋಡಬೇಕಿದೆ ನಿಮ್ಮ ಸ್ನೇಹಿತರು ಕೂಡ ಬಿಪಿಎಲ್ ಕಾರ್ಡ್ದಾರರ ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಮಾಹಿತಿಯನ್ನು ತಿಳಿಸಿರಿ.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.