ಯುವನಿಧಿ ಯೋಜನೆಗೆ ಮುಹೂರ್ತ ಪಿಕ್ಸ್ ! ಸರ್ಕಾರದ ಯುವನಿಧಿ ಯೋಜನೆಯ ಕಂಡೀಶನ್ಗಳು ಏನು ? ಯುವನಿಧಿ ಫಲಾನುಭವಿಗಳು ಯಾರ್ಯಾರು ?ಎಂಬುದನ್ನು ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಸರ್ಕಾರವು ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಸರ್ಕಾರದ ಐದು ಯೋಜನೆಗಳು ಯಾವುವು ಎಂದರೆ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆ , ಗೃಹ ಜ್ಯೋತಿ ಯೋಜನೆ ಎಂಬ 5 ಯೋಜನೆಗಳನ್ನು ಜಾರಿಗೆ ತಂದಿದ್ದು. ಈಗಾಗಲೇ ಇದೇ ದಿನಗಳಲ್ಲಿ 4 ಯೋಜನೆಗಳನ್ನು ಜಾರಿಗೆ ತಂದು ಪ್ರಾರಂಭಿಸಲಾಗಿದೆ ಆದರೆ ಕೊನೆಯ ಯೋಜನೆ ಯುವನಿಧಿ ಯೋಜನೆಯನ್ನು ಇತ್ತೀಚಿನ ದಿನಗಳಲ್ಲಿ ಜಾರಿಗೆ ತಂದಿರಲಿಲ್ಲ. ಸರ್ಕಾರವು ಈಗಾಗಲೇ ಡಿಸೆಂಬರ್ ತಿಂಗಳಿನಲ್ಲಿ ಇವನಿಗೆ ಯೋಜನೆಯನ್ನು ಜಾರಿಗೆ ತರಬೇಕು ಎಂದು ತಯಾರಿಯನ್ನು ಮಾಡಿದ್ದರು ಆದರೆ ಅದು ಇನ್ನೂ ಸಂಕ್ಷಿಪ್ತವಾಗಿ ತಿಳಿದಿಲ್ಲ. ಆದರೆ ಈ ಯೋಜನೆಯ ಬಗ್ಗೆ ಈಗ ಬಂದ ಮಾಹಿತಿಯ ಪ್ರಕಾರ ಯುವನಿಧಿ ಯೋಜನೆ ಕೂಡ ಈಗ ಚಾಲನೆ ನೀಡಲಾಗಿದ್ದು ಜನವರಿ ಅಲ್ಲಿ ಚಲಾವಣೆಯ ಮುಹೂರ್ತ ಫಿಕ್ಸ್ ಆಗಿದೆ.

WhatsApp Group Join Now
Telegram Group Join Now

ಈಗಾಗಲೇ ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆಯ ಹೆಚ್ಚಿನದಾಗಿ ಜನರ ಗಮನವನ್ನು ಸೆಳೆದಿದೆ ಎಂದೇ ಹೇಳಬಹುದು. ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯು ತುಂಬ ಪ್ರಖ್ಯಾತಿ ಯೋಜನೆ ಎಂದೆ ಹೇಳಬಹುದು. ಆದರೆ ಈಗ ಯುವನಿಧಿ ಯೋಜನೆಯು ಕೂಡ ಜಾರಿಗೆ ಬರಲಿದೆ. ಯುವನಿಧಿ ಯೋಜನೆಯನ್ನು ಸರ್ಕಾರವು ಜಾರಿಗೆ ತರಲು ಮುಖ್ಯ ಕಾರಣವೆಂದರೆ ಉದ್ಯೋಗ ಇಲ್ಲದೆ ಮನೆಯಲ್ಲಿ ಕುಳಿತುಕೊಂಡು ಕೆಲಸ ಸಿಗದೇ ಕಳೆದು ಅಲೆದು ಸಾಕಾಗಿ ಡಿಗ್ರಿ ಮತ್ತು ಡಿಪ್ಲೋಮೋ ಮಾಡಿದವರಿಗೆ ಮಾತ್ರ ಯುವ ನಿಧಿ ಯೋಜನೆ ಯು ಅನ್ವಯಿಸುತ್ತದೆ ಎಂದು ಹೇಳಬಹುದು.

ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ ಅದೇ ರೀತಿ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು. ಈಗ ವಿದ್ಯಾರ್ಥಿಗಳಿಗೋಸ್ಕರ ಅಂದರೆ ಯುವಕರಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಯುವಕರಿಗೋಸ್ಕರ ತಂದಿರುವ ಯೋಜನೆ ಯುವನಿಧಿ ಯೋಜನೆ. ಇದರಿಂದಾದರೂ ಅವರಿಗೆಲ್ಲ ಉದ್ಯೋಗ ಸಿಗಲಿ ಎಂಬುವುದೇ ಸರ್ಕಾರದ ಉದ್ದೇಶ. ಉದ್ಯೋಗ ಇರದವರಿಗೆ ಈ ಯೋಜನೆಯ ಫಲ ದೊರೆಯುತ್ತದೆ ಹೊರತು, ಉದ್ಯೋಗ ಹೊಂದಿದವರಿಗೆ ಈ ಪ್ರಯೋಜನ ಸಿಗುವುದಿಲ್ಲ ಎಂದು ಸರ್ಕಾರವು ಕಳಕಂಡಿತವಾಗಿ ಹೇಳಿಕೆ ನೀಡಿದೆ.

ಯುವನಿಧಿ ಯೋಜನೆ !

ಯುವನಿಧಿ ಯೋಜನೆಯನ್ನು ಯುವಕರಿಗೋಸ್ಕರ ಜಾರಿಗೆ ತರಲಾಗಿದೆ ಅಂದರೆ ಡಿಗ್ರಿ ಮತ್ತು ಡಿಪ್ಲೋಮೋ ಮಾಡಿದ ವಿದ್ಯಾರ್ಥಿಗಳಿಗೆ ಕೆಲಸ ದೊರಕದೆ ಹೋಗಿದ್ದರೆ. ಅಂಥವರು ಮಾತ್ರ ಈ ಯೋಜನೆಯ ಫಲವನ್ನು ಪಡೆಯಬಹುದು. ಅಂತವರು ಮಾತ್ರ ಎರಡು ವರ್ಷಗಳ ಕಾಲ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಉದ್ಯೋಗ ಇಲ್ಲದೆ ಇರುವವರಿಗೆ ಯೋಜನೆಯನ್ನು ಜಾರಿಗೆ ತಂದಿದ್ದು. ಯೋಜನೆಗೆ ಅರ್ಜಿ ಹಾಕಿದರೆ ಈ ಯೋಜನೆಯ ಫಲ ನಿಮಗೆ ದೊರೆಯುತ್ತದೆ. ಯುವನಿಧಿ ಯೋಜನೆ ಉದ್ಯೋಗ ಸಿಕ್ಕ ಮೇಲೆ ಈ ಯೋಜನೆಯ ಪ್ರಯೋಜನವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ ನಿರುದ್ಯೋಗಿಗಳಿಗಾಗಿ ಯೋಜನೆ ಜಾರಿಯಾಗಿದ್ದು, ಉದ್ಯೋಗ ಸಿಕ್ಕ ಮೇಲೆ ಈ ಯೋಜನೆ ಫಲ ನಿಮಗೆ ಸಿಗುವುದಿಲ್ಲ. ಇವನಿಗೆ ಯೋಜನೆಯ ಆರಂಭ ಜನವರಿ ಎಂದು ಆಗಲಿದ್ದು, ನಂತರ ಎಲ್ಲರೂ ಈ ಯೋಜನೆಗೆ ಅರ್ಜಿ ಹಾಕಬೇಕೆಂದು ಸರ್ಕಾರವು ತಿಳಿಸಿದೆ.

ಈಗಾಗಲೇ ಡಿಸೆಂಬರ್ ತಿಂಗಳಿನಲ್ಲಿಯೇ ಮುಹೂರ್ತ ಫಿಕ್ಸ್ ಆಗಬೇಕಿತ್ತು ಆದರೆ ಜನವರಿಯಿಂದ ಪ್ರಾರಂಭಿಸಲಾಗುತ್ತದೆ ಯುವನಿಧಿ ಯೋಜನೆಯನ್ನು. ಒಟ್ಟಾರೆ ಡಿಗ್ರಿ ಮತ್ತು ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರತಿಲ್ಲವೆಂದರೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ 3000 ರೂ. ಗಳನ್ನು ನೀಡಲಾಗುತ್ತದೆ ಮತ್ತು ಡಿಪ್ಲೋಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ ಎಂದು ಸರ್ಕಾರವು ಮುಂಚಿತವಾಗಿ ಗ್ಯಾರಂಟಿಗಳಲ್ಲಿ ತಿಳಿಸಿದ್ದು, ನುಡಿದಂತೆ ನಡೆಯುತ್ತಿದೆ.

ಯುವನಿಧಿ ಯೋಜನೆಗೆ ಅರ್ಜಿ ಹಾಕಲು ಅಗತ್ಯವಿರುವ ದಾಖಲೆಗಳು !

  • 10ನೇ ತರಗತಿ ಅಂಕಪಟ್ಟಿ
  • ಆಧಾರ್ ಕಾರ್ಡ್
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ
  • ಪದವಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ
  • ಡಿಪ್ಲೋಮಾ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಇ-ಮೇಲ್ ಐಡಿ
  • ಬ್ಯಾಂಕ್ ಖಾತೆಯ ವಿವರಗಳು
  • ಭಾವಚಿತ್ರ
  • ಸ್ವಯಂಘೋಷಣ ಪ್ರತಿಗಳ ಜೊತೆಗೆ ಅರ್ಜಿ ಸಲ್ಲಿಸಬೇಕು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment